ಆಶಾಕಿರಣ

ಇತಿಹಾಸದ ಪುಟಪುಟಗಳಲ್ಲಿ
ಸಾವು, ನೋವು, ರಕ್ತ
ಮಾನವರ ಬೇಟೆ ನರಮೇಧ
ಸಾವಿನ ಬಾಯಿಗೆ ಬಲಿಯಾದವರು,
ಉಳಿದು ಊನರಾಗಿ ಭಾರವಾದವರು,
ತೋಪಿನ ಬಾಯಿಗೆ ಎದೆಕೊಟ್ಟು
ವೀರ ಪಟ್ಟವ ಪಡೆದು
ಸ್ವಾತಂತ್ರ್ಯಕ್ಕಾಗಿ ಹಗಲಿರುಳೂ
ಹಂಬಲಿಸಿ ಮಣ್ಣಾದವರು.
ಇವರ ಹೆಂಗಸರಿಗೆ ಉಳಿದದ್ದು
ವಿಧವೆಯರ ಪಟ್ಟ
ಹಸಿವು ದಾರಿದ್ರ್ಯಗಳ ನರ್ತನ,
ಜಾತಿ-ಮತಗಳ ಮತ್ಸರ
ದುಷ್ಟ ಶಕ್ತಿಗಳ ಕೈವಾಡ
ಆಂತರಿಕ ಭಯ
ಅಭದ್ರತೆಯ ಕಾಟ
ಅಸಹಾಯಕ ಜನತೆಯನು
ಬಲಿಕೊಡುವ ಕಸಾಯಿಗಳ
ಕೈಯಿಂದ ಜನರನು
ಹೇಗೆ ಉಳಿಸಿಕೊಳ್ಳಲಿ?

ನನ್ನವರೆ ಒಂದಾಗಿರಿ
ಹಿಂದಿನವರ ತ್ಯಾಗ
ಬಲಿದಾನಗಳ ನೆನೆದು
ಸಾಮ್ರಾಜ್ಯಶಾಹಿಗಳ ಸೊಕ್ಕಡಗಿಸಲು
ಪಟ್ಟಭದ್ರರ – ಕುಟಿಲ ತಂತ್ರಗಳನ್ನು
ಹುಸಿಗೊಳಿಸಲು ಒಂದಾಗಿರಿ
ದೇಶದ ಮೇಲೆ ಹರಡಿದ
ಕಪ್ಪು ಕತ್ತಲೆಯ ಸರಿಸಲು
ಬೆಳಕಿನ ಆಶಾಕಿರಣವಾಗಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿದ್ದಲಾರದ ಭೂತ
Next post ತಾಯಿಯ ಒಲವು

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys